Kannada GK Questions and Answers ಕನ್ನಡ ಕ್ವಿಜ್ ಪ್ರಶ್ನೆಗಳು | Karnataka KPSC GK Quiz In Kannada
1. ಬಾಕ್ಸೈಟ್ ನಿಂದ ಅಲ್ಯೂಮಿನಿಯಂ ಲೋಹವನ್ನು ಪಡೆಯಲು ಅನುಸರಿಸುವ ಮುಖ್ಯ ವಿಧಾನ ಯಾವುದು?
Answer:ವಿದ್ಯುದ್ವಿಭಜನೆ (Electrolysis)
2. ಸಮುದ್ರಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದ ಇತಿಹಾಸಕಾರ ಯಾರು?
Answer:ವಿ. ಎ. ಸ್ಮಿತ್
3. ಘನವಸ್ತುಗಳಲ್ಲಿ ಶಬ್ದದ ವೇಗವು ಎಷ್ಟಿರುತ್ತದೆ?
Answer:ಸುಮಾರು 6000 m/sec
4. ಕಾದಂಬರಿಗಳು ರಾಜ ಮತ್ತು ಕಾದಂಬರಿಗಳ ಸಾರ್ವಭೌಮ ಎಂದು ಖ್ಯಾತರಾದವರು ಯಾರು?
Answer:ಅರಕಲಗೂಡು ನರಸಿಂಗ ಕೃಷ್ಣರಾವ್
5. “ವಂದೇ ಮಾತರಂ” ರಾಷ್ಟ್ರೀಯ ಹಾಡನ್ನು ಯಾವಾಗ ಅಂಗೀಕರಿಸಲಾಯಿತು?
Answer:1950 ಜನೆವರಿ 24
6. ಭೂಮಿಯ ವಿಮೋಚನಾ ವೇಗ (Escape Velocity) ಎಷ್ಟು?
Answer:11.2 km/sec
7. ಹೊಯ್ಸಳರ ರಾಜಧಾನಿಯ ಹೆಸರೇನು?
Answer:ಹಳೇಬೀಡು (ಹಿಂದಿನ ದ್ವಾರಸಮುದ್ರ)
8. ಸಾರ್ವತ್ರಿಕ ದಾನಿ ಎಂದು ಕರೆಯಲ್ಪಡುವ ರಕ್ತದ ಗುಂಪು ಯಾವುದು?
Answer:‘O’
9. ಆಂಧ್ರ ಪ್ರದೇಶದ ಹೊಸ ರಾಜಧಾನಿ ಯಾವುದು?
Answer:ಅಮರಾವತಿ
10. ‘ವಾಕಿಂಗ್ ವಿತ್ ಕಾಮ್ರೆಡ್‘ ಪುಸ್ತಕದ ಲೇಖಕರು ಯಾರು?
Answer:ಅರುಂಧತಿ ರಾಯ್
11. ಶಿಕ್ಷಕರ ದಿನಾಚರಣೆಯನ್ನು ಯಾರ ನೆನಪಿಗಾಗಿ ಆಚರಣೆ ಮಾಡಲಾಗುತ್ತದೆ?
Answer:ಭಾರತರತ್ನ ಸರ್ವಪಲ್ಲಿ ರಾಧಾಕೃಷ್ಣನ್
12. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಯಾವುದು?
Answer:ಕಾಂಗರೂ
13. ವಾಂಖಡೆ ಸ್ಟೇಡಿಯಂ ಇರುವುದು ಎಲ್ಲಿ?
Answer:ಮುಂಬಯಿ
14. ಧಿಂಗ್ ಎಕ್ಸ್ಪ್ರೆಸ್ (Dhing Express) ಎಂದು ಯಾರಿಗೆ ಕರೆಯಲಾಗಿದೆ?
Answer:ಹಿಮಾದಾಸ್
15. ಕರ್ನಾಟಕದಲ್ಲಿ ಎಷ್ಟು ಪರಮಾಣು ವಿದ್ಯುತ್ ಸ್ಥಾವರಗಳಿವೆ?
Answer:ಒಂದು ( ಕೈಗಾ ಪರಮಾಣು ವಿದ್ಯುತ್ ಸ್ಥಾವರ)
16. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
Answer:ಸರ್. ಎಂ. ವಿಶ್ವೇಶ್ವರಯ್ಯ
17. ವಿಶ್ವ ಪರಿಸರ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
Answer:ಜೂನ್ 5
18. ಸಾರ್ವತ್ರಿಕ ಸ್ವೀಕಾರಿ ಎಂದು ಕರೆಯಲ್ಪಡುವ ರಕ್ತದ ಗುಂಪು ಯಾವುದು?
Answer:AB
19. ಕಾಲಿಂಗ್ ಕಿಣ್ವಗಳನ್ನು ಉತ್ಪತ್ತಿಮಾಡುವ ಗ್ರಂಥಿ ಯಾವುದು?
Answer:ಲಾಲಾ ಗ್ರಂಥಿ
20. ಮರುಭೂಮಿಯಲ್ಲಿ ಕಂಡುಬರುವ ಮರಿಚಿಕೆ ಗಳಿಗೆ ಕಾರಣವಾದ ವಿದ್ಯಮಾನ ಯಾವುದು?
Answer:ಸಂಪೂರ್ಣ ಆಂತರಿಕ ಪ್ರತಿಫಲನ (Total Internal Reflection)
21. ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?
Answer:ಸೋಡಿಯಂ ಕ್ಲೋರೈಡ್ (NaCl)
22. ವಾತಾವರಣದಲ್ಲಿರುವ ಓಝೋನ್ ಪದರದ ಕೆಲಸವೇನು?
Answer:ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವುದು
23. ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರವನ್ನು ನೀಡುವ ಕಾಯ್ದೆ ಯಾವುದು?
Answer:24 ನೇ ತಿದ್ದುಪಡಿ ಕಾಯ್ದೆ(1971)
24. ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನವನ್ನು ಯಾರು ಲೆಕ್ಕಹಾಕುತ್ತಾರೆ?
Answer:ಕೇಂದ್ರ ಸಾಂಖ್ಯಕೀಯ ಸಂಸ್ಥೆ
25. ಸೌರಮಂಡಲದ ಅತಿ ದೊಡ್ಡ ಉಪಗ್ರಹ ಯಾವುದು?
Answer:ಗ್ಯಾನಿಮೇಡ
26. ಸೌರಮಂಡಲದ ಅತಿ ಚಿಕ್ಕ ಉಪಗ್ರಹ ಯಾವುದು?
Answer:ಯುರೋಪಾ
27. ಓಝೋನ್ ಪದರವು ನಾಶವಾಗುತ್ತಿರುವುದುಕ್ಕೆ ಪ್ರಮುಖ ಕಾರಣ ಯಾವುದು?
Answer:ಕ್ಲೋರೋ ಪ್ಲೋರೋ ಕಾರ್ಬನ್(CFC)
28. ಗಂಗಾ ನದಿಯ ಮುಖಜ ಭೂಮಿಯನ್ನು ಏನೆಂದು ಕರೆಯುತ್ತಾರೆ?
Answer:ಸುಂದರ್ಬನ್
29. ವೇದ ಎಂಬ ಪದದ ಅರ್ಥ ಏನು?
Answer:ಜ್ಞಾನ (ಶೃತಿ)
30. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಯಾವಾಗ ಆರಂಭಿಸಲಾಯಿತು?
Answer:28 ಡಿಸೆಂಬರ್ 1885
31. ಕನ್ನಡದ ಅತ್ಯಂತ ಪ್ರಾಚೀನ ಗ್ರಂಥ ಯಾವುದು?
Answer:ಕವಿರಾಜ ಮಾರ್ಗ
32. ದಕ್ಷಿಣ ಪಥೇಶ್ವರ ಎಂಬ ಬಿರುದಾಂಕಿತ ದೊರೆ ಯಾರು?
Answer:ಇಮ್ಮಡಿ ಪುಲಕೇಶಿ
33. ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ ಯಾವುದು?
Answer:ಗ್ರಾಮ ಪಂಚಾಯತ್
34. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?
Answer:ಬಚೇಂದ್ರಿ ಪಾಲ್
35. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಯಾವಾಗ ಆಯಿತು?
Answer:1915
36. ಡಬ್ಲ್ಯೂ.ಹೆಚ್.ಒ ದ ಕೇಂದ್ರ ಕಚೇರಿ ಎಲ್ಲಿದೆ?
Answer:ಸ್ವಿಜರ್ಲ್ಯಾಂಡಿನ ಜಿನಿವಾ
37. ದ. ರಾ. ಬೇಂದ್ರೆಯವರ ಅಂಕಿತನಾಮ ಯಾವುದು?
Answer:ಅಂಬಿಕಾತನಯ ದತ್ತ
38. ರಾಷ್ಟ್ರೀಯ ಮತದಾರರ ದಿನ ಎಂದು ಯಾವಾಗ ಆಚರಣೆ ಮಾಡುತ್ತಾರೆ?
Answer:25 ಜನವರಿ
39. ನಮ್ಮ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು?
Answer:ಡಾಲ್ಫಿನ್
40. ಸಸ್ಯಗಳ ಸಂತಾನೋತ್ಪತ್ತಿ ಅಂಗ ಯಾವುದು?
Answer:ಹೂವು
41. ಪಂಚಾಯಿತಿಗಳಲ್ಲಿ ಮಹಿಳೆಯರಿಗಿರುವ ಮೀಸಲಾತಿಯ ಪ್ರಮಾಣ ಎಷ್ಟು?
Answer:50%
42. ಬೆಂಕಿರೋಗ ಬಹುಮುಖ್ಯವಾಗಿ ಯಾವ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ?
Answer:ಭತ್ತ
43. ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ?
Answer:ಅಲ್ಯುಮಿನಿಯಂ
44. ಪ್ರಥಮ ಭಾರತೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಯಾರು?
Answer:ಶ್ರೀಮತಿ ಸರೋಜಿನಿ ನಾಯ್ಡು
45. ನೀಲಿ ಕ್ರಾಂತಿ ಪಿತಾಮಹ ಯಾರು?
Answer:ಹರಿಲಾಲ್ ಚೌದರಿ
46. ಭಾರತ ಹಾರಿಸಿದ ಮೊದಲ ಉಪಗ್ರಹದ ಹೆಸರೇನು?
Answer:ಆರ್ಯಭಟ
47. ಕನ್ನಡದ ಮೊದಲ ಚಲನಚಿತ್ರ ಯಾವುದು?
Answer:ಸತಿ ಸುಲೋಚನ
48. ನೌಕಾಪಡೆ ದಿನವನ್ನು ಎಂದು ಆಚರಿಸಲಾಗುತ್ತದೆ?
Answer:ಡಿಸೆಂಬರ್ 4
ಆಚರಣೆಗಳು ದಿನಾಂಕಗಳು
ಕನ್ನಡ ರಾಜ್ಯೋತ್ಸವ ನಂಬರ್ 1
ವಿಶ್ವ ರೆಡ್ ಕ್ರಾಸ್ ದಿನ ಮೇ 8
ಹಿಂದಿ ದಿನ ಸಪ್ಟೆಂಬರ್ 14
ಧ್ವಜ ದಿನ ಡಿಸೆಂಬರ್ 7
ವಿಶ್ವ ಏಡ್ಸ್ ದಿನ ಡಿಸೆಂಬರ್ 1
ಮಾನವ ಹಕ್ಕುಗಳ ದಿನ ಡಿಸೆಂಬರ್ 10
49. ವರ್ಣಾಂಧತೆ ಇರುವವರು ಯಾವ ಬಣ್ಣಗಳನ್ನು ಗುರುತಿಸಲಾರರು?
Answer:ಕೆಂಪು, ಹಸಿರು ಮತ್ತು ನೀಲಿ
50. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಯಾವ ಗ್ರಹಣ ಸಂಭವಿಸುತ್ತದೆ?
Answer:ಸೂರ್ಯಗ್ರಹಣ
51. ವಾಹನಗಳಲ್ಲಿ ಹಿನ್ನೋಟದ ಕನ್ನಡಿಯಾಗಿ ಬಳಸುವ ಮಸೂರ ಯಾವುದು?
Answer:ಪೀನ ಮಸೂರ
52. ಪ್ರಾಥಮಿಕ ಬಣ್ಣಗಳು ಯಾವುವು?
Answer:ಕೆಂಪು, ಹಸಿರು ಮತ್ತು ನೀಲಿ
53. ಸಸ್ಯಗಳಿಗೆ ಆಹಾರವನ್ನು ಸರಬರಾಜು ಮಾಡುವ ಅಂಗಾಂಶ ಯಾವುದು?
Answer:ಪ್ಲೋಯಂ
54. ಬಾಂಬೆ ಷೇರು ಮಾರುಕಟ್ಟೆಯ ಷೇರು ಸೂಚ್ಯಂಕ ಯಾವುದು?
Answer:ಸೆನ್ಸೆಕ್ಸ್ (SENSEX)
55. ಭಾರತದ ಯೋಜನಾ ಆಯೋಗದ ಮೊದಲ ಅಧ್ಯಕ್ಷರು ಯಾರು
Answer:ಜವಾಹರ್ಲಾಲ್ ನೆಹರು
56. ಮುಂಜಾನೆ ನಕ್ಷತ್ರ ಅಥವಾ ಬೆಳ್ಳಿ ಚುಕ್ಕಿ ಎಂದು ಯಾವ ಗ್ರಹಕ್ಕೆ ಕರೆಯುತ್ತಾರೆ?
Answer:ಶುಕ್ರ ಗ್ರಹ
57. ಹಗಲು ರಾತ್ರಿ ಉಂಟಾಗಲು ಕಾರಣವಾದ ಭೂಮಿಯ ಚಲನೆ ಯಾವುದು?
Answer:ದೈನಂದಿನ ಚಲನೆ
58. ಬಸವ ಸಾಗರ ಜಲಾಶಯ ಎಲ್ಲಿದೆ?
Answer:ಯಾದಗಿರಿ ಜಿಲ್ಲೆಯ ನಾರಾಯಣಪುರ
59. ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರಗಳನ್ನು ಸೇರಿಸುವ ಕಾಲುವೆ ಯಾವುದು?
Answer:ಸೂಯೆಜ್ ಕಾಲುವೆ
60. ರಾಷ್ಟ್ರಕೂಟ ವಂಶದ ಸ್ಥಾಪಕ ಯಾರು?
Answer:ದಂತಿದುರ್ಗ
61. ವಾಸ್ಕೋಡಿಗಾಮನು ಪ್ರಪ್ರಥಮವಾಗಿ ಭಾರತಕ್ಕೆ ಬಂದು ತಲುಪಿದ ಕಲ್ಲಿಕೋಟೆ ಯಾವ ರಾಜ್ಯದಲ್ಲಿದೆ?
Answer:ಕೇರಳ
62. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
Answer:ಹರ್ಡೇಕರ್ ಮಂಜಪ್ಪ
63. ತಾಳಿಕೋಟೆ ಯುದ್ಧ ಯಾವಾಗ ನಡೆಯಿತು?
Answer:ಕ್ರಿ.ಶ 1565
64. ಕರ್ನಾಟಕದ ಪ್ರಥಮ ಹಿಂದುಳಿದ ವರ್ಗದ ಮುಖ್ಯಮಂತ್ರಿ ಯಾರು?
Answer:ಡಿ. ದೇವರಾಜ್ ಅರಸು
65. GST ಯ ವಿಸ್ತೃತ ರೂಪವೇನು?
Answer:Goods And Service Tax
66. ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸಂಧಿಸುವ ಕಾಲ್ಪನಿಕ ರೇಖೆಗಳಿಗೆ ಏನೆಂದು ಕರೆಯುತ್ತಾರೆ?
Answer:ರೇಖಾಂಶಗಳು
67. ದೇಹದ ಉಷ್ಣಾಂಶವನ್ನು ಅಳೆಯಲು ಬಳಸುವ ಸಾಧನ ಯಾವುದು?
Answer:ಥರ್ಮಾಮೀಟರ್
68. ಕಬ್ಬಿಣ ತುಕ್ಕು ಹಿಡಿಯುವುದರಿಂದ ಅದರ ತೂಕದಲ್ಲಾಗುವ ಬದಲಾವಣೆ ಏನು?
Answer:ತೂಕ ಹೆಚ್ಚಾಗುತ್ತದೆ
69. ಕನ್ನಡದ ಮೊದಲ ಶಾಸನ ಯಾವುದು?
Answer:ಹಲ್ಮಿಡಿ ಶಾಸನ
70. ಗೋಲ್ ಗುಂಬಜ್ ಇರುವುದು ಎಲ್ಲಿ?
Answer:ವಿಜಯಪುರ
71. ಹಂಪಿಯ ಪ್ರಾಚೀನ ಅವಶೇಷಗಳು ಯಾವ ನದಿಯ ದಡದಲ್ಲಿವೆ?
Answer:ತುಂಗಭದ್ರಾ ನದಿ
72. ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
Answer:ಡಾ. A. P. J.ಅಬ್ದುಲ್ ಕಲಾಂ
73. ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯನ್ನು ನೀಡಿದವರು ಯಾರು?
Answer:ಲಾಲ್ ಬಹದ್ದೂರ್ ಶಾಸ್ತ್ರಿ
74. ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
Answer:1986
75. ಶ್ರೀಲಂಕಾ ಬ್ರಿಟಿಷರಿಂದ ಯಾವಾಗ ಸ್ವಾತಂತ್ರ್ಯ ಪಡೆಯಿತು?
Answer:1948
76. ಕೆಂಪು ರಕ್ತ ಕಣಗಳ ಜೀವಿತಾವಧಿ ಎಷ್ಟು?
Answer:ಸರಿಸುಮಾರು 120 ದಿನಗಳು
77. ಮಾನವನ ಮೆದುಳಿನ ಅತಿ ದೊಡ್ಡ ಭಾಗ ಯಾವುದು?
Answer:ಮುಮ್ಮೆದುಳು (ಸೆರೆಬ್ರಮ್)
78. ಪರಾಗರೇಣುಗಳನ್ನು ಕೇಸರದಿಂದ ಶಲಾಕಾಗ್ರಕ್ಕೆ ವರ್ಗಾಯಿಸುವ ಕ್ರಿಯೆಗೆ ಏನೆಂದು ಹೆಸರು?
Answer:ಪರಾಗಸ್ಪರ್ಶ
79. ಕೃತಕವಾಗಿ ಹಣ್ಣು ಮಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ?
Answer:ಇಥೈಲಿನ್
80. ಗೆಲೀನಾ ಯಾವ ಲೋಹದ ಅದಿರಾಗಿದೆ?
Answer:ಸೀಸ (Pb)
81. ರಾಜ್ಯಸಭೆ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯೋಮಿತಿ ಎಷ್ಟು?
Answer:30 ವರ್ಷ
82. ಭಾಷೆಯ ಆಧಾರದ ಮೇಲೆ ಮೊದಲು ರಚನೆಯಾದ ರಾಜ್ಯ ಯಾವುದು?
Answer:ಆಂಧ್ರಪ್ರದೇಶ
83. ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತು ಪರಿಸ್ಥಿತಿಗಳಿವೆ?
Answer:ಮೂರು
84. SBM ಬ್ಯಾಂಕ್ ನ ಸ್ಥಾಪಕರು ಯಾರು?
Answer:ಸರ್.ಎಂ.ವಿಶ್ವೇಶ್ವರಯ್ಯ
85. ಪೋಬೋಸ್ ಮತ್ತು ಡಿಮೋಸ್ ಯಾವ ಗ್ರಹದ ಉಪಗ್ರಹಗಳಾಗಿವೆ?
Answer:ಮಂಗಳ ಗ್ರಹ
86. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ನಡುವೆ ಸಂಪರ್ಕ ಕಲ್ಪಿಸುವ ಕಾಲುವೆ ಯಾವುದು?
Answer:ಸೂಯೆಜ್ ಕಾಲುವೆ
87. ಸಹರಾ ಮರುಭೂಮಿ ಯಾವ ದೇಶದಲ್ಲಿದೆ?
Answer:ಉತ್ತರ ಆಫ್ರಿಕಾ
88. ಲೂ ಮಾರುತಗಳು ಎಲ್ಲಿ ಕಂಡುಬರುತ್ತವೆ?
Answer:ಉತ್ತರ ಭಾರತ ಮತ್ತು ಪಾಕಿಸ್ತಾನ
89. ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯ ಇರುವುದು ಎಲ್ಲಿ?
Answer:ಬಾಗಲಕೋಟ
90. ಭಾರತದ ಅತಿ ಎತ್ತರದ ಶಿಖರವಾದ ಗಾಡ್ವಿನ್ ಆಸ್ಟಿನ್ ಇದರ ಎತ್ತರ ಎಷ್ಟು?
Answer:8611
91. ಬ್ರಹ್ಮಪುತ್ರ ನದಿಗೆ ಬಾಂಗ್ಲಾದೇಶದಲ್ಲಿ ಯಾವ ಹೆಸರಿದೆ?
Answer:ಪದ್ಮಾ
92. ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲ್ವೆ ವ್ಯವಸ್ಥೆ ಇಲ್ಲ?
Answer:ಕೊಡಗು
93. ಯಾವ ನದಿಗೆ ಅಡ್ಡಲಾಗಿ ಹಿರಾಕುಡ್ ಆಣೆಕಟ್ಟನ್ನು ಕಟ್ಟಲಾಗಿದೆ?
Answer:ಮಹಾನದಿ
94. ಕುದುರೆಮುಖ ಯಾವ ಲೋಹದ ಅದಿರಿಗೆ ಪ್ರಸಿದ್ಧವಾಗಿದೆ?
Answer:ಕಬ್ಬಿಣ
95. ಚಿಲ್ಕಾ ಸರೋವರವು ಭಾರತದ ಯಾವ ರಾಜ್ಯದಲ್ಲಿದೆ?
Answer:ಒಡಿಸ್ಸಾ
96. ಪೆಟ್ರೋಲಜಿ ಎಂಬುವುದು ಯಾವುದರ ಅಧ್ಯಯನ?
Answer:ಶಿಲೆಗಳು
97. ದಕ್ಷಿಣ ಗಂಗೆ ಎಂದು ಯಾವ ನದಿಗೆ ಕರೆಯುತ್ತಾರೆ ?
Answer:ಕಾವೇರಿ
98. ಬುದ್ಧನನ್ನು ಏಷ್ಯಾದ ಬೆಳಕು ಎಂದವರು ಯಾರು?
Answer:ಎಡ್ವಿನ್ ಅರ್ನಾಲ್ಡ್
99. ಬುದ್ಧ ಪದದ ಅರ್ಥವೇನು?
Answer:ಜ್ಞಾನ ಪಡೆದವನು
100. ಅಷ್ಟಾಂಗ ಮಾರ್ಗ ಗಳನ್ನು ಬೋಧಿಸಿದ ಧರ್ಮ ಯಾವುದು?
Answer:ಬೌದ್ಧಧರ್ಮ
ಇದನ್ನು ಓದಿ: ಕನ್ನಡ ಸಾಮಾನ್ಯ ಪ್ರಶ್ನೆ ಉತ್ತರಗಳು
101. ಜಹಾಂಗೀರ್ ನ ಮೊದಲ ಹೆಸರೇನು?
Answer:ಸಲೀಂ
102. ಬ್ರಾಹ್ಮಣರ ಮೇಲೆ ಜೇಸಿಯಾ ಕಂದಾಯವನ್ನು ಹೇರಿದ ಮೊಘಲ್ ದೊರೆ ಯಾರು?
Answer:ಔರಂಗ್ ಜೇಬ್
103. ಭಾರತದ ಮೊದಲ ಪೋರ್ಚುಗೀಸ್ ವೈಸ್ ರಾಯ್ ಯಾರು?
Answer:ಫ್ರಾನ್ಸಿಸ್ಕೋ-ಡಿ-ಅಲ್ಮಿಡಾ
104. ಭಾರತಕ್ಕೆ ಬಂದ ಕೊನೆಯ ಯುರೋಪಿಯನ್ನರು ಯಾರು?
Answer:ಫ್ರೆಂಚರು
105. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು?
Answer:ಆತ್ಮರಾಮ್ ಪಾಂಡುರಂಗ
106. ಕರ್ನಾಟಕವನ್ನು ಆಳಿದ ಪ್ರಥಮ ಕನ್ನಡದ ರಾಜಮನೆತನ ಯಾವುದು?
Answer:ಕದಂಬರು
107. ದಕ್ಷಿಣ ಭಾರತದ ತಾಜಮಹಲ್ ಎಂದು ಯಾವುದಕ್ಕೆ ಕರೆಯುತ್ತಾರೆ?
Answer:ಇಬ್ರಾಹಿಂ ರೋಜ (ವಿಜಯಪುರ ಜಿಲ್ಲೆ)
108. ಮೋಹನ ತರಂಗಿಣಿ ಕೃತಿಯ ರಚನೆಕಾರರು ಯಾರು?
Answer:ಕನಕದಾಸರು
109. ಮೊಘಲರ ಕಾಲದಲ್ಲಿ ಭಾರತಕ್ಕೆ ಬಂದ ಮೊದಲ ವ್ಯಾಪಾರಿಗಳು ಯಾರು?
Answer:ಪೋರ್ಚುಗೀಸರು
110. URL ನ ವಿಸ್ತೃತ ರೂಪವೇನು?
Answer:Uniform Resource Locator
111. GB ಗೆ ಎಷ್ಟು MB ಗಳು ಸಮನಾಗುತ್ತವೆ?
Answer:1024 MB
112. ಸೂರ್ಯ ದೇವಾಲಯ ಇರುವುದು ಎಲ್ಲಿ?
Answer:ಕೊನಾರ್ಕ್
113. ಮೈಸೂರು ವಿಶ್ವವಿದ್ಯಾಲಯದ ಧ್ಯೇಯವಾಕ್ಯವೇನು?
Answer:‘ನಹಿ ಜ್ಞಾನೇನ ಸದೃಶಂ’
114. ನಗಿಸುವ ಅನಿಲವೆಂದು ಯಾವ ಅನಿಲಕ್ಕೆ ಕರೆಯುತ್ತಾರೆ?
Answer:ನೈಟ್ರಸ್ ಆಕ್ಸೈಡ್
115. ಭೂಮಿಯಿಂದ ಎತ್ತರಕ್ಕೆ ಹೋದಹಾಗೆ ನೀರಿನ ಕುದಿಯುವ ಬಿಂದುವಿನಲ್ಲಾಗುವ ಬದಲಾವಣೆ ಏನು?
Answer:ಕುದಿಯುವ ಬಿಂದು ಕಡಿಮೆಯಾಗುತ್ತದೆ
116. ರಕ್ತದಲ್ಲಿ ಇನ್ಸುಲಿನ್ ಕೊರತೆಯಿಂದ ಬರುವ ಕಾಯಿಲೆ ಯಾವುದು?
Answer:ಮಧುಮೇಹ ( ಸಕ್ಕರೆ ಕಾಯಿಲೆ)
117. ಟೆಲಿಸ್ಕೋಪ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು?
Answer:ಗೆಲಿಲಿಯೋ ಗೆಲಿಲಿ